ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸ್ ಅವರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು-
“ಅನುಭವ ಜ್ಞಾನ ಪ್ರಕಾಶ್ ಹೊಈಬೊ ಅನುಭವ ಕರಮುಡ,
ಭಬಿಸ್ಯಾ ಬಿಚ್ಚರ್ ತೇನಿ ಕಿ ಕಹಿಬಿ ಜ್ಞಾನೇ ನಹಿ ಥಲಕುಲ,
ಲೀಲಾ ಪ್ರಕಾಶ್ ಹೆಬಾಹ್ ಭಕ್ತಾಂಕ್ ಲೀಲಾ ಭಾರಿ ಹೊಯ್ಬೆ ಲೀಲಾ ಪ್ರಕಾಶ್ ಹೆಬೋ.”
ಅರ್ಥ –
ಕಲಿಯುಗದ ಅಂತ್ಯದಲ್ಲಿ ಕೇವಲ ಅನುಭವದಿಂದ ಮಾತ್ರ ಜ್ಞಾನದ ಬೆಳಕು ಬರುತ್ತದೆ. ಭಕ್ತರು ಭಗವಂತನನ್ನು ಹುಡುಕಿದರೂ ಭಕ್ತರಿಗೆ ಪ್ರಾಪ್ತಿಯಾಗುವುದಿಲ್ಲ. ಅನುಭವ ಮತ್ತು ನಿಶ್ಚಲವಾದ ಭಕ್ತಿ ಮಾತ್ರವೇ ಭಗವಂತನನ್ನು ಪಡೆಯುವ ಸುಲಭ ಮಾರ್ಗವಾಗಿರುವುದು. ಶ್ರದ್ದೆ , ನಂಬಿಕೆ, ಅನುಭವ ಮತ್ತು ಅಚಲವಾದ ಭಕ್ತಿಯಿಂದ ಭಕ್ತರು ಭಗವಂತನನ್ನು ಪಡೆಯುತ್ತಾರೆ ಮತ್ತು ಅವರ ಸಾನಿಧ್ಯವನ್ನು ಪಡೆಯುತ್ತಾರೆ.
ಇದರ ಬಗ್ಗೆ ಮತ್ತೊಮ್ಮೆ ಮಹಾನ್ ವ್ಯಕ್ತಿ ಅಚ್ಯುತಾನಂದರು ಮಾಲಿಕಾದಲ್ಲಿಈ ರೀತಿ ಬರೆಯುತ್ತಾರೆ …
“ಕೃಷ್ಣ ಭಾಬರಸ ನೋಹೆ ಬೇದಾಭ್ಯಾಸ್ ಪುರ್ಬಾ ಜಾರ್ ಭಾಗ್ಯ ಥಿಬ್.”
ಅರ್ಥ –
ಜನ್ಮ ಜನ್ಮದ ಭಾಗ್ಯ ಅಂದರೆ ಹಿಂದಿನ ಜನ್ಮದಲ್ಲಿ ದೇವರಲ್ಲಿ ಭಕ್ತಿ ಇರುವವರು ಯಾರು ಗೋಪಿ, ಕಪಿ, ತಪಿ ಗಳು ಆಗಿದ್ದರೋ ಅವರಿಗೆ ಮಾತ್ರ ಭಗವಂತನ ಪ್ರಾಪ್ತಿಯಾಗುತ್ತದೆ ಮತ್ತು ಅವರ ಮೂಲಕವೇ ಭಗವಂತ ಮಾನವ ಶರೀರಕ್ಕೆ ಬಂದ ಮಾಹಿತಿ ಸಿಗುತ್ತದೆ. ಕೇವಲ ಆ ಭಕ್ತರಿಗೆ ಮಾತ್ರ ಮಾಲಿಕದ ದಿವ್ಯ ವಾಣಿಯು ತಲುಪಲು ಸಾಧ್ಯ. ಮಾಲಿಕದ ಬ್ರಹ್ಮ ವಾಣಿಯು ಅಮೂಲ್ಯವಾದದು. ಇದಕ್ಕೆ ಸಮಾನವಾದದ್ದು ಜಗತ್ತಿನಲ್ಲಿ ಯಾವ ವಾಣಿಯು ಇಲ್ಲ.
ಭಕ್ತರು ದೇವರನ್ನು ಹೇಗೆ ಗುರುತಿಸುತ್ತಾರೆ?
ಮಹಾಪುರುಷ ಅಚ್ಯುತಾನಂದರು ಮತ್ತೊಮ್ಮೆ ಹೀಗೆ ಬರೆಯುತ್ತಾರೆ…
ಜ್ಞಾನಮಾರ್ಗ, ತರ್ಕಮಾರ್ಗ ಮತ್ತು ಶಾಸ್ತ್ರಗಳಲ್ಲಿ ಸೂಚಿಸಿರುವ ಮಾರ್ಗದ ಮೂಲಕ ಭಕ್ತರು ದೇವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ದೇವರನ್ನು ಪರೀಕ್ಷಿಸಲು ಪ್ರಯತ್ನಿಸುವ ಮಾನವರು ತಮ್ಮ ಬುದ್ಧಿವಂತಿಕೆ, ಆಲೋಚನೆಗಳು ಮತ್ತು ಅವರ ಮೂಢತನ ಮತ್ತು ಚಂಚಲ ಸ್ವಭಾವದಿಂದಾಗಿ ಪವಿತ್ರರಾಗಿರುವುದಿಲ್ಲ. ಕೆಲವೊಮ್ಮೆ ಅವರಲ್ಲಿ ತಾಮಸ ಮನೋಭಾವ ಇರುತ್ತದೆ. ಅಂತಹ ತಾಮಸ
ಸ್ವಭಾವದಿಂದ ಅವರು ತ್ರಿಭುವನಪತಿ ಶ್ರೀ ಭಗವಾನ್ ಅನ್ನು ಪರೀಕ್ಷಿಸುವ ಭಾವನೆಯನ್ನು ಪಡೆಯುತ್ತಾರೆ. ಇದಕ್ಕೆ ವಿರುದ್ಧವಾಗಿ, ಯಾರಲ್ಲಿ ಸಾತ್ವಿಕತೆ ಹೊರಹೊಮ್ಮುತ್ತದೆ, ಅವರಲ್ಲಿ ಭಕ್ತಿಯ ಭಾವನೆಗಳು ಉದ್ಭವಿಸುತ್ತವೆ. ಅವರು ಭಕ್ತಿಯ ಶಾಶ್ವತ ಸಾಗರದಲ್ಲಿ ಮುಳುಗಲು ಪ್ರಾರಂಭಿಸುತ್ತಾರೆ. ಅವರ ಕಣ್ಣುಗಳಿಂದ ಪ್ರೀತಿಯ ಕಣ್ಣೀರು ಭಕ್ತಿಯ ರೂಪದಲ್ಲಿ ಹರಿಯಲು ಪ್ರಾರಂಭಿಸುತ್ತದೆ.
ಮಹಾಪುರುಷ ಮಾಲಿಕಾ ಮೂಲಕ ಹೇಳುತ್ತಾರೆ ಯಾವ ಗುಣಲಕ್ಷಣಗಳೊಂದಿಗೆ ಜನರು ದೇವರನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು.
ಯಾರೊಳಗೆ ಭಕ್ತಿಯ ಲಕ್ಷಣಗಳು ಇರುತ್ತವೆಯೋ, ಸರಳ ಹೃದಯವುಳ್ಳವರು, ಸಂಪೂರ್ಣ ಸಾತ್ವಿಕರು, ಯಾರು ಹಿಂದಿನ ಜನ್ಮಗಳ ಸಂಸ್ಕಾರ ಮತ್ತು ಸಂಪೂರ್ಣ ಸಮರ್ಪಣಾ ಭಾವವನ್ನು ಹೊಂದಿರುತ್ತಾರೆ, ಯಾರು ಇಂದ್ರಿಯ ಕಾಮನೆಯ ಮೋಹದಿಂದ ಮುಕ್ತರಾಗುತ್ತಾರೋ, ಯಾರಲ್ಲಿ ಅಹಂಕಾರಕ್ಕೆ ಸ್ಥಾನವಿರುವುದಿಲ್ಲವೋ ,ಪರಮಾತ್ಮನನ್ನು ಪ್ರಾಪ್ತಿ ಮಾಡುವುದೇ ಮುಖ್ಯ ಗುರಿಯಾಗಿರುವವರು, ಭೌತಿಕ ಜಗತ್ತಿನ ಸುಖಗಳಲ್ಲಿ ಮೋಹವಿಲ್ಲದವರು, ಇತರರ ದುಃಖವನ್ನು ಕಂಡು ದುಃಖಪಡುವವರು, ಪ್ರದರ್ಶನದಿಂದ ದೂರವಿರುವವರು, ಆತ್ಮಗೌರವವುಳ್ಳವರು, ತಮ್ಮಲ್ಲಿ ಈ ಗುಣಗಳನ್ನು ಹೊಂದಿರುವವರು ಭಕ್ತರು ಆಗಿರುತ್ತಾರೆ ಮತ್ತು ದೇವರನ್ನು ಪಡೆಯುತ್ತಾರೆ.
ವರ್ತಮಾನದಲ್ಲಿ ಮನುಷ್ಯ ಸಕಾಲದಲ್ಲಿ ಸದಾಚಾರವನ್ನು ರೂಢಿಸಿಕೊಂಡರೆ, ಶುದ್ಧ ಸಸ್ಯಾಹಾರಿಯಾಗಿ, ಯಾವುದೇ ರೀತಿಯ ಸಣ್ಣ-ದೊಡ್ಡ ಮಾದಕತೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಸದ್ಗುಣವನ್ನು ಅಳವಡಿಸಿಕೊಂಡರೆ ಮತ್ತು ಅಹಂಕಾರವನ್ನು ತ್ಯಜಿಸಿದರೆ, ದೇವರು ಖಂಡಿತವಾಗಿಯೂ ಪಾಪವನ್ನು ಕ್ಷಮಿಸುತ್ತಾನೆ. ಭಗವಂತನ ಶ್ರೀಚರಣದಲ್ಲಿ ಪೂರ್ಣ ಸಮರ್ಪಣಾ ಭಾವ. ಈ ಮಾರ್ಗದ ಮೂಲಕ ಮಾತ್ರ ಜೀವನವನ್ನುಸಾರ್ಥಕಗೊಳಿಸಬಹುದು , ಇಲ್ಲದಿದ್ದರೆ ಭವಿಷ್ಯದ ದೊಡ್ಡ ವಿನಾಶದ ಜ್ವಾಲೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.
ದುಷ್ಕೃತ್ಯ ಮತ್ತು ತಪ್ಪಿನಿಂದಾಗಿ ಇಂದು ಪಾಪವು ತನ್ನ ಮಿತಿಯನ್ನು ಮೀರುತ್ತಿದೆ ಮತ್ತು ಭೂಮಿಯು ಮತ್ತೆ ಮತ್ತೆ ನಡುಗುತ್ತಿದೆ. ಭೂಕಂಪಗಳು ಬರುತ್ತಿವೆ, ಮಾತಾ ವಸುಂಧರೆ ಪಾಪದ ಭಾರವನ್ನು ತಾಳಲಾರದೆ ಒದ್ದಾಡುತ್ತಿದ್ದಾಳೆ, ಆಗ ಹಲವೆಡೆ ಭೂಮಿ ಕಂಪಿಸುವುದು. ಸ್ವಲ್ಪ ಸಮಯದ ನಂತರ ಭೂಕಂಪದ ವೇಗ ಮತ್ತಷ್ಟು ಹೆಚ್ಚಾಗುತ್ತದೆ. ಇವು ವಿನಾಶದ ಚಿಹ್ನೆಗಳು, ಆದ್ದರಿಂದ ಸಮಯಕ್ಕೆ ಎಚ್ಚರವಾಗಿರಿ, ಇಲ್ಲದಿದ್ದರೆ ತಡವಾಗಿ ಅರಿವಾದರೂ ಸಮಯ ಇರುವುದಿಲ್ಲ .
“ಜೈ ಜಗನ್ನಾಥ”