ಮಹಾಪುರುಷ ಶ್ರೀ ಅಚ್ಯುತಾನಂದ ದಾಸರು ಮಾಲಿಕಾದಲ್ಲಿ ಬರೆದ ಅಪರೂಪದ ಸಾಲು.
ಜೋಗಿ ಮಾನಹೆ ಜೋಗಾ ಅಂತನಾ ಪಾಈಬೆ ಅಹು ಕೇಮು ಸಮರಹತಾ|
ಜರ್ ಲಾಗೀ ಖೇಲ್ ತಾರ್ ಲಾಗೀ ಕಾಹಲ್ ಸೆ ಬೆಲ್ ಕುಕಾಲ್ ಕಥಾ||
ಅರ್ಥ –
ಯೋಗಿ, ಋಷಿಗಳು ಮತ್ತು ದೇವತೆಗಳು, ಬ್ರಹ್ಮ ದೇವ ಮತ್ತು ಮಹಾದೇವರು ಸ್ವತಃ ಕಲಿಯುಗದ ಕೊನೆಯಲ್ಲಿ ಮಾಯಾಪತಿ ಭಗವಂತನನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕಲ್ಕಿ ದೇವರ ಅವತಾರದ ನಂತರ, ಅವರ ಅಲೌಕಿಕ ಮಾಯೆಯಿಂದಾಗಿ, ಅವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕಲಿಯುಗದಲ್ಲಿ, ಭ್ರಮೆ ಮತ್ತು ಮೋಹ ದಲ್ಲಿ ಸಿಲುಕಿರುವ ಮತ್ತು ಪರಮ ಸತ್ಯದ ಜ್ಞಾನವಿಲ್ಲದ, ಶುದ್ಧ ಭಕ್ತಿಯ ಜ್ಞಾನವಿಲ್ಲದ ಸಾಮಾನ್ಯ ಮನುಷ್ಯನು, ಅಧಮನು ಆದ ಮನುಷ್ಯನು ಭಗವಂತನನ್ನು ಹೇಗೆ ತಾನೇ ಗುರುತಿಸಬಲ್ಲನು?
ಗರುಡ ಮತ್ತು ದೇವರ ನಡುವಿನ ಸಂಭಾಷಣೆಯಲ್ಲಿ, ಗರುಡದೇವ ಕೇಳುತ್ತಾನೆ, ಭವ-ಭಯಹಾರಿ, ಶ್ರೀ ಮಧುಸೂದನ್, ಚಕ್ರಧರನಾದ ದೇವನೇ, ಓ ಕರ್ತನೇ, ಕಲಿಯುಗದ ಅಂತ್ಯದಲ್ಲಿ ನಿನ್ನ ಅವತಾರದ ನಂತರ ನಾನು ನಿನ್ನನ್ನು ಹೇಗೆ ಗುರುತಿಸಬಲ್ಲೆ. ನಿಮ್ಮ ಪವಿತ್ರ ಪಾದಗಳ ರಸವನ್ನು ಕುಡಿಯುತ್ತಿರುವ ನಿಮ್ಮ ಈ ಅಧಮ ಸೇವಕನನ್ನು ದಯವಿಟ್ಟು ಕರುಣಿಸಿ ಮತ್ತು ನಾನು ನಿಮ್ಮನ್ನು ಹೇಗೆ ಗುರುತಿಸಬಲ್ಲೆ?
ದ್ವಾಪರಯುಗದಲ್ಲಿ ಭಗವಾನ್ ಶ್ರೀಕೃಷ್ಣನ ಪರಮ ಸ್ನೇಹಿತ ಆಗಿದ್ದ ಮಹಾನ್ ವ್ಯಕ್ತಿ ಸಂತ ಶ್ರೀ ಅಚ್ಯುತಾನಂದ ದಾಸ್ ಅವರು ತಮ್ಮ ದಿವ್ಯ ಗ್ರಂಥವಾದ ಭವಿಷ್ಯ ಮಾಲಿಕಾದಲ್ಲಿ ಬರೆಯುತ್ತಾರೆ,
ಕಲಿಯುಗದ ಕೊನೆಯಲ್ಲಿ ಮಾಲಿಕಾವನ್ನು ನೋಡಿ ಜನರು ನಂಬದೆ ನಗುವರು. ಅಪಪ್ರಚಾರ ಮಾಡುವ ಜನರು ಮಹಾಮಾಯೆ ಮತ್ತು ಕಾಳಿದೇವಿಯ ಬೇಟೆಯಾಗಬೇಕಾಗುತ್ತದೆ. ಆನಂತರ ಮಾಲಿಕಾದ ದಿವ್ಯವಾದ ವಾಣಿಯ ಮಹತ್ವ ತಿಳಿಯುತ್ತದೆ ಆದರೆ ಅಷ್ಟೊತ್ತಿಗಾಗಲೇ ತಡವಾಗಿರುತ್ತದೆ. ಸರಿಯಾದ ಸಮಯದಲ್ಲಿ ಸಮಯದ ಗಂಭೀರತೆಯನ್ನು ಗುರುತಿಸಿ ಅರ್ಥೈಸಿ ಕೊಳ್ಳುವುದು ಜ್ಞಾನವುಳ್ಳ ಜನರಿಂದ ಮಾತ್ರ ಸಾಧ್ಯ.
“ಗರುಡ ಸಂವಾದ ಭವಿಷ್ಯ ಮಾಲಿಕಾ” ದಲ್ಲಿ ಹೀಗೆ ಶ್ರೀ ಭಗವಂತನು ಗರುಡದೇವನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು ಮತ್ತು ಅವರ ಅನುಮಾನಗಳನ್ನು ಪರಿಹರಿಸಿದರು ಎಂದು ಬರೆಯಲಾಗಿದೆ.
“ಜೈ ಜಗನ್ನಾಥ”