ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು-
ಭಗವಂತನಿಗೆ ಭಕ್ತರಿಂದ ಪ್ರಶ್ನೆ – ಕಲಿಯುಗದ ಅಂತ್ಯದ ಸಮಯದಲ್ಲಿ ನಾವು ನಿಮ್ಮನ್ನು ಹೇಗೆ ಗುರುತಿಸುತ್ತೇವೆ?
ಆಗ ಮಹಾನ್ ವ್ಯಕ್ತಿ ಅಚ್ಯುತಾನಂದರು ಈ ಪ್ರಶ್ನೆಗೆ ಮಾಲಿಕಾದ ಮಾದ್ಯಮದ ಮೂಲಕ ಉತ್ತರಿಸುತ್ತಾರೆ …
ಸಂಸಾರ ಮಧ್ಯರೇ ಕೇಮಂತ ಜಾನಿಬಿ ನಾರಂಗೇ ದೇಹಬಾಹೀ।
ಗತಾ ಗತ್ ಜೆ ಜುಗರೆ ಮಿಲನ್ ಸಂಸ್ತಾಂಕ್ ಜ ಣಕೋ ನಾಹಿ.
ತ್ರಿಭುವನ ಪತಿಯನ್ನು ಮನುಷ್ಯ ತನುವಿನ ಮೂಲಕ ಗುರುತಿಸುವುದು ಸುಲಭವಲ್ಲ. ಅನುಭವದ ಮಾರ್ಗದಿಂದ ಮಾತ್ರ ದೇವರ ಗುರುತಿಸುವಿಕೆ ಸಾಧ್ಯ ಎಂದು ತಿಳಿಸಿದ್ದಾರೆ. ಮಹಾಪುರುಷ ಅಚ್ಯುತಾನಂದರು ತಮ್ಮ ಮಾಲಿಕಾದಲ್ಲಿ ಈ ವಿಷಯದ ಬಗ್ಗೆ ಮತ್ತೊಮ್ಮೆ ಬರೆಯುತ್ತಾರೆ …
ಅನುಭವೇ ಜ್ಞಾನ ಪ್ರಕಾಶ ಹೋಯಿಬೋ ಅನುಭವ ಕರ್ಮಃ ।
ಭವಿಷ್ಯ ವಿಚಾರ ತೇಣಕಿ ಕಹಿಬಿ ಜ್ಞಾನೇ ನಹಿ ತರಪರ.
ಅರ್ಥ –
ಭಕ್ತರು ಭಕ್ತಿಯ ಮಾರ್ಗದ ಮೂಲಕ ಅನುಭವ ಪಡೆಯುತ್ತಾರೆ. ಮಾಧವ ಮಹಾಪ್ರಭುವೇ ಭಗವಾನ ಮಧುಸೂಧನನೆಂದು ಭಕ್ತರಿಗೆ ತಿಳಿಯುತ್ತದೆ. ಆದರೆ ಎಲ್ಲಾ ಜನರಿಗೆ ಭಗವಂತನ ದರ್ಶನ ದೊರೆಯುವುದಿಲ್ಲ ಎಂದು ಮಹಾನ್ ವ್ಯಕ್ತಿ ಅಚ್ಯುತಾನಂದರು ಭವಿಷ್ಯ ಮಾಲಿಕಾದಲ್ಲಿ ಬರೆದಿದ್ದಾರೆ.
ದೇವಾನುದೇವತೆಗಳೂ ಭೂಮಿಯಲ್ಲಿ ಹುಟ್ಟುವರು, ಆದರೆ ಯಾರು ಹಿಂದಿನ ಜನ್ಮದ ಸಂಸ್ಕಾರವನ್ನು ಹೊಂದಿರುವರು, ದೇವರನ್ನು ಹುಡುಕುವವರು, ದೇವರನ್ನು ಪಡೆಯುವ ಸಂಕಲ್ಪವುಳ್ಳವರು, ಗೋಲೋಕದ, ವೈಕುಂಠದ ವಾಸಿಗಳಾಗಿದ್ದವರು, ಪ್ರತಿ ಯುಗದಲ್ಲೂ ಭಗವಂತನ ಅವತಾರದ ಮೊದಲೇ ಭೂಮಿಯಲ್ಲಿ ಜನಿಸಿದ ಆ ಭಕ್ತರು ನಿಸ್ವಾರ್ಥವಾಗಿ ಶ್ರೀ ಭಗವಾನರ ಆಶ್ರಯಕ್ಕೆ ಬರುತ್ತಾರೆ, ಮುಂದೆ ಆ ಭಕ್ತರೇ ಭವಿಷ್ಯದಲ್ಲಿ ದೇವರ ಆಳ್ವಿಕೆಯನ್ನು ಆನಂದಿಸಲು ಸಾಧ್ಯವಾಗುತ್ತದೆ ಮತ್ತು ಭಗವಂತನ ಮಹಾಪರಾಕ್ರಮ ಮತ್ತು ಮಹಿಮೆ ಅನುಭವಿಸಲು ಸಾಧ್ಯವಾಗುತ್ತದೆ. ಅದೇ ಭಕ್ತರು ಭಗವಂತನಾದ ಅನಂತನ ಆಶ್ರಯದಲ್ಲಿ ಸುಖ ಸಂತೋಷದಿಂದ ಬಾಳುತ್ತಾರೆ.
ಕೋಟಿ ಕೆ ಗೋಟಿಯೇ ಜಹಂತಿ ಸೇರಸ್ ತಿರಿಸೆ ಸಹಸ್ತ್ರ ಗಣಸಾಹಿ।
ಮಹಿಮಾ ಪ್ರಕಾಶ ನಿಚ್ಚಯ ರಾಮದಾಸ ಆನೆಮೊ ಕೋಹುಂತಿ ನಾಹೀ.
ಅರ್ಥ –
ಒಂದು ಕೋಟಿ ಜನರಲ್ಲಿ ಒಬ್ಬ ಭಕ್ತ ಮಾತ್ರ ಶ್ರೀ ಭಗವಂತನ ಅನುಭವವನ್ನು ಹೊಂದುತ್ತಾನೆ ಮತ್ತು ಅವನ ಹೃದಯದಲ್ಲಿ ನಮ್ಮ ರಕ್ಷಕನಾದ ಭಗವಂತ ಶ್ರೀ ಹರಿಯು ಭೂಮಿಗೆ ಅವತರಿಸಿದ್ದಾನೆ ಎಂದು, ಸಮಯದ ಗಂಭೀರತೆಯನ್ನು ಪರಿಗಣಿಸಿ ನಾವು ಭಗವಂತನ ಆಶ್ರಯಕ್ಕೆ ಹೋಗಬೇಕು ಎಂಬ ಅರಿವು ಅವನಿಗಾಗುತ್ತದೆ. ಅಂತಹವರು ದೇವರ ಸಾಂಗತ್ಯವನ್ನು ಪಡೆದು ಧನ್ಯರಾಗುತ್ತಾರೆ. ಇದು ಭಕ್ತಿಯಿಂದ ಮಾತ್ರ ಅನುಭವವಾಗುತ್ತದೆ. ಭಕ್ತಿ ಮಾರ್ಗದಿಂದ ಮಾತ್ರ ದೇವರನ್ನು ತಿಳಿಯಬಹುದು ಬೇರೆ ದಾರಿಯಿಲ್ಲ.
“ಜೈ ಜಗನ್ನಾಥ”