ಕಲಿಯುಗವು ಅಂತ್ಯ ಗೊಂಡಿದೆ ಮತ್ತು ಈ ಸತ್ಯವನ್ನು ಸಾಬೀತುಪಡಿಸಲು, ಮಹಾಪುರುಷರಾದ ಪಂಚಸಖರು ಭವಿಷ್ಯ ಮಾಲಿಕಾ ಗ್ರಂಥಗಳಲ್ಲಿ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ: –
ಎ) ಮನುಷ್ಯನ ನಡುವಳಿಕೆಯಲ್ಲಿ ಆಗುವ ಪರಿವರ್ತನೆಗಳು:-
- ಮಾನವ ಸಮಾಜದಲ್ಲಿ ಕೆಲವೊಂದು ಕಡೆ ದಂಪತಿಗಳಿಗೆ ಕೆಲವು ದೋಷಗಳ ಕಾರಣ ಮಕ್ಕಳು ಜನಿಸದೇ ಇರುವುದು.
- ಸಮಾಜದಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ತಮ್ಮ ಲಿಂಗವನ್ನು ಬದಲಾಯಿಸಿಕೊಳ್ಳುತ್ತಾರೆ.
- ಸಮಾಜದಲ್ಲಿ ಕೆಲೆವೆಡೆ ಮಕ್ಕಳು ಸ್ವಾರ್ಥ ಮತ್ತು ಹಣದ ದುರಾಸೆಯಿಂದಾಗಿ ತಂದೆ–ತಾಯಿಯನ್ನು ಕೊಲ್ಲುತ್ತಾರೆ.
- ಅವಿಭಕ್ತ ಕುಟುಂಬದ ಸಂಪ್ರದಾಯವು ಸಮಾಜದಿಂದ ಕಣ್ಮರೆಯಾಗುತ್ತದೆ, ಸಹೋದರ– ಸಹೋದರರಲ್ಲದೆ, ಕೆಲವು ಸ್ಥಳಗಳಲ್ಲಿ ಗಂಡ ಮತ್ತು ಹೆಂಡತಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಾರೆ.
- ಕೆಲವು ಮಕ್ಕಳು ತಮ್ಮ ಹೆತ್ತವರನ್ನು ಮನೆಯಿಂದ ಹೊರಹಾಕುತ್ತಾರೆ, ಅವರು ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆಯಬೇಕಾಗುತ್ತದೆ.
- ಹೆಚ್ಚಿನ ಸಂಖ್ಯೆಯಲ್ಲಿ ಮನುಷ್ಯರು ನಿತ್ಯವೂ ಸಣ್ಣಪುಟ್ಟ ಕಾಯಿಲೆಗಳಿಂದ ಬಳಲುತ್ತಾ
- ಔಷಧಿಗೆ ಅವಲಂಬಿಸಿ, ಜೀವನ ಸಾಗಿಸುತ್ತಿರುತ್ತಾರೆ.
- ಸಮಾಜದಲ್ಲಿ ಮಾಂಸಾಹಾರಿಗಳು, ಮದ್ಯವ್ಯಸನಿಗಳು, ತಂಬಾಕು ಸೇವಿಸುವವರು ಮತ್ತು ಮಾದಕ ವ್ಯಸನಿಗಳ ಸಂಖ್ಯೆ ಬಹಳಷ್ಟು ಹೆಚ್ಚಾಗುತ್ತದೆ.
- ಗರ್ಭಪಾತ ಮತ್ತು ಭ್ರೂಣ ಹತ್ಯೆಯಂತಹ ಪಾಪಗಳು ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ.
- ಜಗತ್ತಿನಲ್ಲಿ ಬಹುಪತ್ನಿತ್ವ (ವಿವಾಹೇತರ ಸಂಬಂಧಗಳು) ಸಂಖ್ಯೆ ಬಹಳಷ್ಟು ಹೆಚ್ಚಾಗುತ್ತದೆ.
- ಗಂಡ ಮತ್ತು ಹೆಂಡತಿಯ ನಡುವೆ ಯಾವುದೇ ಪವಿತ್ರತೆ ಇರುವುದಿಲ್ಲ.
- ಜನರು ದೇವರನ್ನು ಪೂಜಿಸುವುದಿಲ್ಲ.
- ಪುತ್ರರು ತಮ್ಮ ಮೃತ ತಂದೆ ತಾಯಿಯರ ಪಿಂಡ ದಾನ ಮಾಡುವುದಿಲ್ಲ.
- ಕೆಲವು ಪುತ್ರರು ಪೋಷಕರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ.
- ವಿಧವೆಯರು ಅಂತಿಮ ವಿಧಿಗಳನ್ನು ನೆರವೇರಿಸುತ್ತಾರೆ ಮತ್ತು ಪಿಂಡದಾನವನ್ನು ನೀಡುತ್ತಾರೆ.
- ಪುರುಷರು–ಪುರುಷರು ಪರಸ್ಪರ ಮದುವೆಯಾಗಲು ಪ್ರಾರಂಭಿಸುತ್ತಾರೆ.
- ಮಹಿಳೆಯರು–ಮಹಿಳೆಯರು ಪರಸ್ಪರ ಮದುವೆಯಾಗಲು ಪ್ರಾರಂಭಿಸುತ್ತಾರೆ.
- ಸಹೋದರರು–ಸಹೋದರಿಯರು ಸಹ ಪರಸ್ಪರ ಮದುವೆಯಾಗಲು ಪ್ರಾರಂಭಿಸುತ್ತಾರೆ.
- ಕೆಲವಡೆ ತಂದೆ ತನ್ನ ಮಗಳೊಂದಿಗೆ ತಪ್ಪು ಸಂಬಂಧವನ್ನು ಇಟ್ಟುಕೊಳ್ಳುತ್ತಾನೆ.
- ಪುರುಷರು ಮ್ಲೇಚ್ಛ ರೀತಿಯಲ್ಲಿ ವರ್ತಿಸುತ್ತಾರೆ. ಮತ್ತು ಮಹಿಳೆಯರು ಕಾಮುಕರಾಗಿ ರಾಕ್ಷಸಿ ಪ್ರವೃತಿ ಹೊಂದಿರುತ್ತಾರೆ.
- ಕೆಲವು ಪುರುಷರು ಸಹ ಮಕ್ಕಳಿಗೆ ಜನ್ಮ ನೀಡುವರು.
- ಪುರುಷರು ತಲೆಯ ಮೇಲ್ಭಾಗದಲ್ಲಿ ಕೂದಲನ್ನು ಇಟ್ಟುಕೊಳ್ಳುತ್ತಾರೆ ಮತ್ತು ಕಿವಿಯ ಉಳಿದ ಭಾಗದಿಂದ ಕೂದಲನ್ನು ಕತ್ತರಿಸುತ್ತಾರೆ.
- ತಾಯಿಯ ಚಿಕ್ಕಮ್ಮ ಮತ್ತು ಸೋದರಳಿಯ ನಡುವೆ ಮದುವೆ ನಡೆಯುತ್ತದೆ.
- ಚಿಕ್ಕಮ್ಮ ಮತ್ತು ಸೋದರಳಿಯ ನಡುವೆ ಮದುವೆ ನಡೆಯುತ್ತದೆ.
- ಅತ್ತೆ ಮತ್ತು ಅಳಿಯ ನಡುವೆ ಅನೈತಿಕ ಸಂಬಂಧಗಳು ರೂಪುಗೊಳ್ಳುತ್ತವೆ.
- ಚಿಕ್ಕಪ್ಪ ತನ್ನ ಸೊಸೆಯೊಂದಿಗೆ ಮದುವೆಯಾಗಲು ಪ್ರಾರಂಭಿಸುತ್ತಾನೆ.
- ಪ್ರತಿಯೊಬ್ಬರೂ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಉಡುಗೆ ತೋಡುತ್ತಾರೆ.
- ವಿವಾಹಿತ ಮಹಿಳೆಯರು ಹಣೆಯ ಮೇಲೆ ಸಿಂಧೂರವನ್ನು ಮತ್ತು ಕೈಗಳಲ್ಲಿ ಬಳೆಗಳನ್ನು ಧರಿಸುವುದಿಲ್ಲ.
- ಕಲಿಯುಗದಲ್ಲಿ ಯಾವುದೇ ಮನುಷ್ಯನು ಶತ ಪ್ರತಿಶತ ಆಯಸ್ಸನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.
- ಗೀತೆ, ಭಾಗವತ್, ಶಾಸ್ತ್ರ ಮತ್ತು ಪುರಾಣಗಳನ್ನು ಬಿಟ್ಟು ಮಾನವ ಸಮಾಜವು ಕಾಮಶಾಸ್ತ್ರವನ್ನು ಅಧ್ಯಯನ ಮಾಡುತ್ತದೆ.
- ಜನರು ಮಾತಾ ತುಳಸಿಯನ್ನು ಪೂಜಿಸುವುದಿಲ್ಲ.
- ಜನರು ಗ್ರಾಮ ದೇವತೆ/ಕುಲದೇವಿಯನ್ನು ಪೂಜಿಸುವುದನ್ನು ನಿಲ್ಲಿಸುತ್ತಾರೆ.
- ಸಮಾಜದಲ್ಲಿ ಸುಳ್ಳು ಹೇಳುವವರ ಸಂಖ್ಯೆ ಬಹಳಷ್ಟು ಹೆಚ್ಚಾಗುತ್ತದೆ.
- ಪಾಪಿಗಳು, ಭ್ರಷ್ಟರು ಮತ್ತು ಅಜ್ಞಾನಿಗಳು ಸಮಾಜದಲ್ಲಿ ಹೆಚ್ಚಿನ ಗೌರವವನ್ನು ಪಡೆಯುತ್ತಾರೆ.
- ಮದುವೆಯಲ್ಲಿ ಉಚ್ಚ–ನೀಚ, ಜಾತಿ–ಜಾತಿ, ಧರ್ಮ ಮತ್ತು ವರ್ಣ ಇರುವುದಿಲ್ಲ.
- ಕಿರಿಯ ವಯಸ್ಸಿನ ಪುರುಷರು ವಯಸ್ಸಾದ ಮಹಿಳೆಯರನ್ನು ಮದುವೆಯಾಗುತ್ತಾರೆ.
- ಬುದ್ಧಿವಂತ ಮತ್ತು ಸೌಮ್ಯ ಜನರು ಗಾಯತ್ರಿ ಮಂತ್ರದ ಅಭ್ಯಾಸವನ್ನು ಬಿಟ್ಟು, ವಾಮಾಚಾರ ಇತ್ಯಾದಿಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸುತ್ತಾರೆ.
- ರಕ್ಷಕನೇ ಭಕ್ಷಕನಾಗುತ್ತಾನೆ.
- ಲೋಕದಿಂದ ವೇದಮಾರ್ಗ ನಶಿಸಿಹೋಗುತ್ತದೆ.
- ಮಹಿಳೆಯರು ತಮ್ಮ ಕೂದಲನ್ನು ಬಿಟ್ಟು ಕೊಂಡು ತಿರುಗಾಡುತ್ತಾರೆ. ಯುವತಿಯರು ಅರೆಬೆತ್ತಲೆ ವಸ್ತ್ರಗಳನ್ನು ಧರಿಸಿ ತಮ್ಮ ಅಂಗಗಳನ್ನು ಪ್ರದರ್ಶಿಸುತ್ತಾರೆ.
- ಕೆಲವು ಮಹಿಳೆಯರು ತಮ್ಮ ದೇಹವನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ.
- ಕಲಿಯುಗದ ಕೊನೆಯ ಅವಧಿಯಲ್ಲಿ ರಾಜರು ಆಳುವುದಿಲ್ಲ.
- ಜನರು ಏಕಾದಶಿಯಂದು ಉಪವಾಸವನ್ನು ಆಚರಿಸುತ್ತಾರೆ ಆದರೆ ಮಾಂಸಾಹಾರವನ್ನು ತಿನ್ನುತ್ತಾರೆ.
- ಕೆಲವರು ಮಹಾಪ್ರಸಾದದ ಜೊತೆಗೆ ಮದ್ಯ ಮತ್ತು ಮಾಂಸವನ್ನು ತಿನ್ನಲು ಪ್ರಾರಂಭಿಸುತ್ತಾರೆ.
- ಜನರು ಅಕಾಲಿಕ ಸಮಯದಲ್ಲಿ ಆಹಾರ,ವಿಹಾರ ಮತ್ತು ನಿದ್ರೆ ಮಾಡುತ್ತಾರೆ.
- ಅಕಾಲದಲ್ಲಿ ಅಥವಾ ಹಗಲು ಹೊತ್ತಿನಲ್ಲಿ ಪತಿ–ಪತ್ನಿಯರ ಸಂಭೋಗದಿಂದ ಮಕ್ಕಳು ಗರ್ಭದಲ್ಲಿಯೇ ನಾಶವಾಗುತ್ತಾರೆ.
- ಸಮಾಜದಲ್ಲಿ ಕೆಲವು ಅವಿವಾಹಿತರು ರಹಸ್ಯವಾಗಿ ಗರ್ಭಪಾತವನ್ನು ಮಾಡಿಸಿಕೊಳ್ಳುತ್ತಾರೆ.
- ಸಮಾಜದ ಕೆಲವು ಪುರುಷರು ಅಪರಿಚಿತ ಮಹಿಳೆಯನ್ನು ಅಪಹರಿಸಿ, ಅವಳೊಂದಿಗೆ ಮೋಜು ಮಾಡುತ್ತಾರೆ.
- ಅಶಾಂತಿಯ ವಾತಾವರಣವು ಪ್ರಪಂಚದ ಎಲ್ಲಾ ಕುಟುಂಬಗಳಲ್ಲಿ ಪ್ರತಿಫಲಿಸುತ್ತದೆ
(ಬಿ) ಪ್ರಕೃತಿ ಮತ್ತು ಪಂಚಭೂತಗಳಲ್ಲಿ ಕಂಡು ಬರುವ ಪರಿವರ್ತನೆಗಳು: –
- ಮಧ್ಯರಾತ್ರಿಯಲ್ಲಿ ಕೋಗಿಲೆ ಹಾಡುತ್ತದೆ.
- ಮಾವಿನ ಮರದಲ್ಲಿ ಅಕಾಲಿಕವಾಗಿ ಹಣ್ಣುಗಳು ಮತ್ತು ಹೂವುಗಳು ಬರಲು ಪ್ರಾರಂಭಿಸುತ್ತವೆ.
- ಬೇವಿನ ಮರದಲ್ಲಿ ಅಕಾಲಿಕವಾಗಿ ಹೂವುಗಳು ಮತ್ತು ಹಣ್ಣುಗಳು ಬೆಳೆಯಲು ಪ್ರಾರಂಭಿಸುತ್ತವೆ.
- ವಿವಿಧ ಮರಗಳಲ್ಲಿ, ವಿವಿಧ ಹಣ್ಣುಗಳು ಮತ್ತು ಹೂವುಗಳು ಪೂರ್ವನಿಯೋಜಿತವಾಗಿ ಯಾವುದಾಗಿರಬೇಕು ಅದಲ್ಲದೆ ಬೇರೆ ಹೂವು, ಹಣ್ಣುಗಳು ಬೆಳೆಯುತ್ತವೆ. (ತುಳಸಿ ಗಿಡದಲ್ಲಿ ದಾಸವಾಳದ ಹೂವು) ಅಥವಾ ಒಂದೇ ಸಸ್ಯದ ಬೇರಿನಲ್ಲಿ ಆಲೂಗಡ್ಡೆ ಮತ್ತು ಕಾಂಡದಲ್ಲಿ ಟೊಮೆಟೊ ಹಣ್ಣುಗಳು ಬರಲು ಪ್ರಾರಂಭಿಸುತ್ತವೆ.
- ಬಿದಿರು ಮರಗಳಲ್ಲಿ ಭತ್ತ ಬೆಳೆಯುತ್ತದೆ.
- ಹೊಲಗಳಲ್ಲಿಯೇ ಧಾನ್ಯಗಳಲ್ಲಿ ಹುಳುಗಳು ಆಗುತ್ತವೆ.
- ಕೆಲವು ಕಡೆ ಹೆಚ್ಚು ಮಳೆ, ಕೆಲವು ಕಡೆ ಕಡಿಮೆ ಮಳೆಯಾಗುವುದರಿಂದ ಬೆಳೆಗಳೂ ಕಡಿಮೆಯಾಗುತ್ತವೆ.
- ಅನೇಕ ಸ್ಥಳಗಳಲ್ಲಿ ಕ್ಷಾಮ ಉಂಟಾಗುತ್ತದೆ.
- ಮಿಂಚಿನಿಂದಾಗಿ ಮನುಷ್ಯರು ಮತ್ತು ಪ್ರಾಣಿಗಳು ಸಾಯುತ್ತವೆ.
- ಗೋವುಗಳು ಕೂಡ ಅಕಾಲಿಕವಾಗಿ ಸಾಯುತ್ತದೆ.
- ಅಜ್ಞಾತ ರೋಗಗಳು ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಹರಡಲು ಪ್ರಾರಂಭಿಸುತ್ತವೆ.
- ಭೂಮಿಯ ಮೇಲೆ 64 ವಿಧದ ಸಾಂಕ್ರಾಮಿಕ ರೋಗಗಳು ಹರಡುತ್ತವೆ.
- ಋತುಗಳು ಅಕಾಲಿಕವಾಗಿ ಬದಲಾಗುತ್ತವೆ ಮತ್ತು 6 ಋತುಗಳನ್ನು ಕೇವಲ 13 ದಿನಗಳಲ್ಲಿ ನೋಡಬಹುದಾಗಿದೆ.
- ನದಿಗಳಲ್ಲಿ ಅಕಾಲಿಕ ಪ್ರವಾಹ ಉಂಟಾಗುತ್ತದೆ.
- ಸೂರ್ಯನ ಕಿರಣಗಳು 10 ಪಟ್ಟು ಹೆಚ್ಚು ತೀವ್ರವಾಗಿರುತ್ತದೆ.
- ಅಕಾಲದಲ್ಲಿ (ಮಧ್ಯಾಹ್ನ) ಮಂಜು ಇರುತ್ತದೆ.
- ಚಂಡಮಾರುತಗಳು ಮತ್ತೆ ಮತ್ತೆ ಬರುತ್ತವೆ ಮತ್ತು ಚಂಡಮಾರುತದ ಕಾರಣ ಸಮುದ್ರವು ಕರಾವಳಿಯ ಗಡಿಯನ್ನು ಉಲ್ಲಂಘಿಸುತ್ತದೆ.
- ಮರುಭೂಮಿಯಲ್ಲಿ ಪ್ರವಾಹ ಉಂಟಾಗುತ್ತದೆ.
- ಭಾರೀ ಮಳೆಯಿಂದಾಗಿ, ಪರ್ವತಗಳ ತುದಿಯಲ್ಲಿಯೂ ಪ್ರವಾಹ ಉಂಟಾಗುತ್ತದೆ ಮತ್ತು ಇದು ಮನುಷ್ಯರ ಮತ್ತು ಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ.
- ಜಲಚರಗಳು ಮತ್ತು ಸಮುದ್ರ ಜೀವಿಗಳು ಸಹ ಬಹಳಷ್ಟು ಸಾಯುತ್ತವೆ.
- ಕಾಡಿನಲ್ಲಿ ವಾಸಿಸುವ ಅನೇಕ ಕಾಡು ಪ್ರಾಣಿಗಳು ಹಳ್ಳಿಗಳಿಗೆ ಮತ್ತು ನಗರಗಳಿಗೆ ಬರುವ ಮೂಲಕ ಮನುಷ್ಯರಿಗೆ ಹಾನಿ ಮಾಡುತ್ತವೆ.
- ಸೂರ್ಯನ ತೀವ್ರ ಶಾಖದಿಂದಾಗಿ ಉತ್ತರ ಮತ್ತು ದಕ್ಷಿಣ ಮೇರು ಪರ್ವತದ ಮಂಜುಗಡ್ಡೆ ಕರಗಲು ಪ್ರಾರಂಭಿಸುತ್ತದೆ.
- ದೊಡ್ಡ ಕಾಡುಗಳಲ್ಲಿ ಕಾಡ್ಗಿಚ್ಚ್ಚಿನಿಂದಾಗಿ ಕೋಟಿಗಟ್ಟಲೆ ಕಾಡು ಪ್ರಾಣಿಗಳು ಸಾಯುತ್ತವೆ.
- ಪ್ರತಿ ತಿಂಗಳು, ಪ್ರತಿದಿನ, ಭೂಮಿಯ ಮೂಲೆ ಮೂಲೆಯಲ್ಲಿ ಭೂಕಂಪ–ಕಂಪನಗಳು ಬರಲು ಪ್ರಾರಂಭಿಸುತ್ತವೆ.
- ನರಿಗಳು ಹಗಲಿನಲ್ಲಿ ಕೂಗುತ್ತವೆ.
- ಕೋಳಿಯ ಕಿರೀಟದ ಬಣ್ಣವು ಕೆಂಪು ಬಣ್ಣದಿಂದ ಬಿಳಿ ಬಣ್ಣಕ್ಕೆ ಬದಲಾಗುತ್ತದೆ.
- ವೈಶಾಖ ಮಾಸದಲ್ಲಿಯೂ ಕಮಲ ಅರಳುತ್ತದೆ.
- ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಹೊಗೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
- ಭೂಮಿಯ ಸಮತಟ್ಟಾದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮೋಡಗಳು ಸಿಡಿಯುತ್ತವೆ ಮತ್ತು ಮಳೆಯಾಗುತ್ತವೆ.
- ಪ್ರತಿ ತಿಂಗಳು, ಬಿರುಗಾಳಿಗಳು, ಸೈಕ್ಲೋನಿಕ್ ಬಿರುಗಾಳಿಗಳು, ಧೂಳಿನ ಬಿರುಗಾಳಿಗಳು ಇತ್ಯಾದಿಗಳು ಭೂಮಿಯ ಕೆಲವು ಸ್ಥಳಗಳಲ್ಲಿ ಕಂಡು ಬರುತ್ತವೆ
- ಅನೇಕ ಹೊಸ ಮತ್ತು ಸುಪ್ತ ಜ್ವಾಲಾಮುಖಿಗಳು ಭೂಮಿಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
(ಸಿ) ಗ್ರಹಗಳು ಮತ್ತು ನಕ್ಷತ್ರಪುಂಜಗಳಲ್ಲಿ ಕಂಡು ಬರುವ ಪರಿವರ್ತನೆಗಳು
- ಚಂದ್ರನ ಕಿರಣಗಳು ಮಬ್ಬಾಗಿ ಕಾಣಿಸುತ್ತವೆ.
- ಸೂರ್ಯನ ಕಿರಣಗಳು ತುಂಬಾ ತೀಕ್ಷ್ಣವಾಗಿರುತ್ತದೆ
- ಆಗಾಗ್ಗೆ ಪಕ್ಷಗಳಲ್ಲಿ ಪರಿವರ್ತನೆಯಾಗಿ 13 ದಿನದ ಪಕ್ಷ ಶುರುವಾಗುತ್ತದೆ.
- ಪದೇ–ಪದೇ ಉಲ್ಕಾಪಾತಗಳು ಆಕಾಶದಿಂದ ಬೀಳುತ್ತವೆ.
- ಒಂದೇ ದಿನದಲ್ಲಿ ಒಮ್ಮುಖವಾಗಿ ಅನೇಕ ಬಾರಿ ಅಮವಾಸ್ಯೆ ಮತ್ತು ಸಂಕ್ರಾಂತಿ ಸಂಭವಿಸುತ್ತದೆ.
- ಒಂದೇ ದಿನದಲ್ಲಿ ಒಮ್ಮುಖವಾಗಿ ಅನೇಕ ಬಾರಿ ಹುಣ್ಣಿಮೆ ಮತ್ತು ಸಂಕ್ರಾಂತಿಯು ಸಂಭವಿಸುತ್ತದೆ.
- ಒಂದೇ ಪಕ್ಷದ ಅಂತರದಲ್ಲಿ ಅಮಾವಾಸ್ಯೆಯಂದು ಸೂರ್ಯಗ್ರಹಣ ಮತ್ತು ಹುಣ್ಣಿಮೆಯಂದು ಚಂದ್ರಗ್ರಹಣವು ಗೋಚರಿಸುತ್ತದೆ.
- ಅಕಾಲದಲ್ಲಿ ಸೂರ್ಯನ ಸುತ್ತಲೂ ಉಂಗುರವು ಪ್ರತಿಫಲಿಸುತ್ತದೆ ಮತ್ತು ಅಕಾಲದಲ್ಲಿ ಚಂದ್ರನ ಸುತ್ತಲೂ ಉಂಗುರವು ಪ್ರತಿಫಲಿಸುತ್ತದೆ.
- ಗ್ರಹಗಳು ಮತ್ತು ನಕ್ಷತ್ರಪುಂಜಗಳಲ್ಲಿಆಗಾಗ್ಗೆ ಅಸ್ವಾಭಾವಿಕ ಬದಲಾವಣೆಗಳು ಕಂಡುಬರುತ್ತವೆ.
- ಸೂರ್ಯನ ಕಿರಣಗಳು 10 ಪಟ್ಟು ಹೆಚ್ಚು ತೀಕ್ಷ್ಣವಾಗಿರುತ್ತದೆ.
- ಗ್ರಹಗಳ ಚಲನೆಯಲ್ಲಿ ಆಗಾಗ್ಗೆ ಬದಲಾವಣೆಗಳು ಕಂಡುಬರುತ್ತವೆ.
- ಗ್ರಹಗಳು ಮತ್ತು ನಕ್ಷತ್ರಪುಂಜಗಳು ಪರಿಸ್ಥಿತಿಗೆ ಅನುಗುಣವಾಗಿರುವುದಿಲ್ಲ.
- ಸೂರ್ಯ ಮತ್ತು ಚಂದ್ರರು ಏಳು ಹಗಲು ಮತ್ತು ಏಳು ರಾತ್ರಿಗಳು ಗೋಚರಿಸುವುದಿಲ್ಲ ಮತ್ತು ಆ ಸಮಯದಲ್ಲಿ ಕತ್ತಲು ಕವಿದಿರುತ್ತವೆ.
- ಪರಿವರ್ತನೆಯ ಸಮಯದಲ್ಲಿ, ಭಗವಾನ್ ಕಲ್ಕಿಯ ಮುಖಾಂತರ ಹೊಸ ಸೂರ್ಯ, ಚಂದ್ರ ಮತ್ತು ಹೊಸ ನಕ್ಷತ್ರಪುಂಜಗಳು ಸ್ಥಾಪನೆಯಾಗುತ್ತವೆ.
(ಡಿ) ಆಧ್ಯಾತ್ಮಿಕ ಪರಿವರ್ತನೆ :-
- ಅನೇಕ ದೇವಾಲಯಗಳ ಮೇಲೆ ಸಿಡಿಲು ಬೀಳುತ್ತದೆ.
- ಕೆಲವು ದೇವಸ್ಥಾನದ ಮೇಲೆ ಸಿಡಿಲು ಬಡಿದು ದೇವಸ್ಥಾನದ ಧ್ವಜ ಸುಟ್ಟು ಹೋಗುತ್ತದೆ ಅಥವಾ ಹರಿದುಹೋಗುತ್ತದೆ.
- ಹೆಚ್ಚಿನ ದೇವಾಲಯಗಳಲ್ಲಿ ಕಳ್ಳತನ ಮತ್ತು ಲೂಟಿ ಆಗುತ್ತದೆ, ದೇವಾಲಯಗಳಲ್ಲಿ ದೇವರ ವಿಗ್ರಹಗಳು ಸಹ ಕಳ್ಳತನವಾಗುತ್ತವೆ.
- ದೇವಸ್ಥಾನದ ಒಳಗೂ ಜನರು ದುಷ್ಕೃತ್ಯವನ್ನು ಮಾಡುತ್ತಾರೆ.
- ಮಾಂಸಾಹಾರ ಮತ್ತು ಮದ್ಯ ಸೇವಿಸುವ ಪುರೋಹಿತರು ದೇವಾಲಯಗಳಲ್ಲಿ ಪೂಜೆಯನ್ನು ಮಾಡುತ್ತಾರೆ.
- ಜನರು ಮಾಂಸಾಹಾರವನ್ನು ಸೇವಿಸಿ ಮತ್ತು ಮದ್ಯಪಾನವನ್ನು ಮಾಡಿ ದೇವಾಲಯವನ್ನು ಪ್ರವೇಶಿಸುತ್ತಾರೆ .
- ವಿವಿಧ ದೇವಾಲಯಗಳು ಮತ್ತು ಆಧ್ಯಾತ್ಮಿಕ ಸ್ಥಳಗಳಲ್ಲಿ ಆಧ್ಯಾತ್ಮಿಕ ವಾತಾವರಣ ಇರುವುದಿಲ್ಲ.
- ದೇವಾಲಯಗಳಲ್ಲಿ ದೇವಾನುದೇವತೆಗಳು ಇದ್ದಾಗಲೂ ದೇವಾಲಯಗಳ ನಿರ್ವಹಣೆ ಇರುವುದಿಲ್ಲ.
- ಕೆಲವು ಮಂದಿರಗಳಲ್ಲಿ ದೇವರ ಮತ್ತು ದೇವತೆಗಳ ಪೂಜೆ ನಡಿಯುವುದಿಲ್ಲ .
- ಈ ಎಲ್ಲಾ ಪಾಪ ಕರ್ಮಗಳಿಂದ ದೇವತೆಗಳು ದೇವಸ್ಥಾನ ಮತ್ತು ಪೂಜಾ ಸ್ಥಳವನ್ನು ಬಿಟ್ಟು ಹೋಗುತ್ತಾರೆ.
(ಇ) ಗುರು, ಶಿಷ್ಯ ಮತ್ತು ಸಾಧು –ಸಂತರ ರೂಪರೇಖೆ:-
- ಅನೇಕ ಜನರು ತಮ್ಮ ಜೀವನವನ್ನು ನಡೆಸಲು ಗುರು ಪರಂಪರೆಯನ್ನು ಪ್ರಾರಂಭಿಸುತ್ತಾರೆ.
- ಗುರುಗಳಿಗೆ ಶಾಸ್ತ್ರ ಮತ್ತು ಪುರಾಣ ಮತ್ತು ಧರ್ಮದ ಯಾವುದೇ ಜ್ಞಾನ ಇರುವುದಿಲ್ಲ.
- ಕೆಲವರು ತಂತ್ರ ಸಾಧನಾ ಮತ್ತು ವಾಮಾಚಾರ ಮಾಡುವ ಮೂಲಕ ಗುರು ಎಂದು ಕರೆಯಿಸಿಕೊಳ್ಳುತ್ತಾರೆ.
- ಭೂತ, ಪ್ರೇತ, ಪಿಶಾಚಿಗಳ ಕಾಟವನ್ನು ಹೋಗಲಾಡಿಸಲು ಹೊರಟಿರುವವರು (ಭೂತ ವಿಸರ್ಜನೆ ಕೆಲಸವನ್ನುಮಾಡುವವರು) ಸಮಾಜದಲ್ಲಿ ಸಿದ್ದ ಸಂತರೆಂದು ಕರೆಯಿಸಿ ಕೊಳ್ಳುತ್ತಾರೆ.
- ಮಾಂಸಾಹಾರ ಮತ್ತು ಮದ್ಯಪಾನ ಗುರು ಪರಂಪರೆಯಲ್ಲಿಯೂ ಶುರುವಾಗುತ್ತದೆ.
- ಉನ್ನತ ಜಾತಿಯ ಜನರು ಕೈಯಲ್ಲಿ ಬಲೆ ಮತ್ತು ಸಲಾಕೆ ಹಿಡಿದು ಮೀನು ಹಿಡಿಯಲು ಪ್ರಾರಂಭಿಸುತ್ತಾರೆ ಮತ್ತು ಕಟುಕ ಕೆಲಸವನ್ನು ಮಾಡುತ್ತಾರೆ.
- ಬ್ರಹ್ಮಚಾರಿಗಳು ಬ್ರಹ್ಮಚರ್ಯವನ್ನು ಅನುಸರಿಸುವುದಿಲ್ಲ.
- ತಂದೆ–ತಾಯಿ ನೀಡಿದ ಹೆಸರನ್ನು ಬದಲಿಸಿ, ಹೆಸರಿನ ಮುಂದೆ ಸಂತ, ಶ್ರೀ ಶ್ರೀ, ಸ್ವಾಮೀಜಿ, ದಾಸ್, ಮಹಾರಾಜ ಮುಂತಾದ ಬಿರುದುಗಳನ್ನು ಸೇರಿಸಿ, ಅವರು ತಮ್ಮನ್ನು ದೇವರು / ಮಹಾಪುರುಷ ಎಂದು ಕರೆಯಿಸಿಕೊಳ್ಳುತ್ತಾರೆ .
- ಕೇಸರಿ ಮತ್ತು ಕೇಸರಿ ಬಟ್ಟೆಗಳನ್ನು ಧರಿಸಿ , ತಮ್ಮನ್ನು ತಾವೇ ಗುರು ಎಂದು ಸಂಭೋದಿಸಿ ಕೊಳ್ಳುತ್ತಾರೆ.
- ಕಾಡು ಕಡಿದು ಕಾಡು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ದೇವರ ಜಾಗವೆಂದು ಪೂಜೆ ಸಲ್ಲಿಸಿ, ಸುಳ್ಳು ಮಹಿಮೆಯನ್ನು ಪ್ರಚಾರ ಮಾಡುತ್ತಾರೆ.
- ಗುರುಗಳೆಂದು ಕರೆಯಲ್ಪಡುವವರು ತಮ್ಮ ಶಿಷ್ಯೆಯನ್ನೇ ಮದುವೆಯಾಗುತ್ತಾರೆ ಮತ್ತು ಅವರನ್ನು ತಮ್ಮ ಪಟ್ಟದರಾಣಿ ಮಾಡಿಕೊಳ್ಳುತ್ತಾರೆ.
- ಕಲಿಯುಗದ ಕೊನೆಯಲ್ಲಿ, ವೇಷಧಾರಿ ಗುರು ತನ್ನನ್ನು ತಾನು ದೇವರ ಅವತಾರವೆಂದು, ತನ್ನನು ಪೂಜಿಸುವಂತೆ ಹೇಳುತ್ತಾನೆ.
- ನಕಲಿ ಶಂಖ ಚಕ್ರವನ್ನು ತೋರಿಸಿ ತನ್ನನ್ನು ಕಲ್ಕಿ ಭಗವಾನ್ ಎಂದು ಕರೆದು ಜನರನ್ನು ಲೂಟಿ ಮಾಡುವನು.
- ಗುರು ಎಂದು ಕರೆಯಿಸಿಕೊಂಡು ಆಮಿಷಗಳನ್ನು ತೋರಿಸಿ, ಶಿಷ್ಯನ ಹೆಂಡತಿಯ ಗಮನ ಸೆಳೆಯುತ್ತಾನೆ.
- ತನ್ನನ್ನು ಗೋಪಾಲನೆಂದು ಮತ್ತು ಶಿಷ್ಯನನ್ನು ಗೋಪಿ ಎಂದು ಕರೆದು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳುತ್ತಾನೆ
- ಗುರುವು ತನ್ನನು ನಾರಾಯಣ ಎಂದು, ಶಿಷ್ಯರಿಗೆ ಮೋಕ್ಷ ಮತ್ತು ಸಂತೋಷ, ಸಮೃದ್ಧಿ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುವ ದುರಾಶೆಯನ್ನು ನೀಡುವ ಮೂಲಕ ಅವರಿಂದ ತನ್ನ ಸೇವೆಯನ್ನು ಮಾಡಿಸಿಕೊಳ್ಳುತ್ತಾನೆ.
- ತನ್ನ ತಲೆಯ ಮೇಲೆ ಜಡೆಯನ್ನು ಧರಿಸಿ ತನ್ನನ್ನು ತಾನು ಸಂತನೆಂದು ಕರೆದುಕೊಳ್ಳುತ್ತಾನೆ ಮತ್ತು ಜನರನ್ನು ಲೂಟಿ ಮಾಡುತ್ತಾನೆ.
- ಅನಕ್ಷರಸ್ಥರು, ಸೋಮಾರಿಗಳು ತಮ್ಮನ್ನು ತಾವು ದೇವರ ಸೇವಕರೆಂದು ಕರೆದುಕೊಳ್ಳುತ್ತಾರೆ ಮತ್ತು ತಮ್ಮ ಹೆಗಲ ಮೇಲೆ ಪವಿತ್ರ ಜನಿವಾರವನ್ನು ಧರಿಸಿ ಜನರನ್ನು ವಂಚಿಸಲು ಪ್ರಾರಂಭಿಸುತ್ತಾರೆ.
- ಕಪಟ ಗುರು ಹೆಚ್ಚಾಗಿ ಶ್ರೀಮಂತರನ್ನು ಮಾತ್ರ ಶಿಷ್ಯರನ್ನಾಗಿ ಮಾಡಿಕೊಳ್ಳುತ್ತಾನೆ.
- ಗುರು ಎಂದು ಕರೆಯಲ್ಪಡುವವನು ಶಿಷ್ಯ ಮತ್ತು ಶಿಷ್ಯರ ಆಸ್ತಿಯಿಂದ ಐಷಾರಾಮಿ ಜೀವನ ನಡೆಸುತ್ತಾನೆ.
- ಶಿಷ್ಯನಿಂದ ಸಂಪತ್ತು, ಚಿನ್ನ, ಬೆಳ್ಳಿ ಇತ್ಯಾದಿ ಲೋಹಗಳ ದಕ್ಷಿಣೆಯನ್ನು ತೆಗೆದುಕೊಂಡು ವೈಕುಂಠದಲ್ಲಿ ಸ್ಥಾನ ನೀಡುವ ಸುಳ್ಳು ವಾಗ್ಧನ ನೀಡುವನು.
- ಸುಂದರ ಸ್ತ್ರೀಯರಿಗೆ ವಿವಿಧ ರೀತಿಯ ಪ್ರಲೋಭನೆಗಳನ್ನು ನೀಡಿ, ಅವರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಅವರು ತಮ್ಮ ಕಾಮವನ್ನು ಪೂರೈಸಿಕೊಳ್ಳುತ್ತಾರೆ.
ಈ ರೀತಿಯಾಗಿ, ಯುಗದ ಅಂತ್ಯದಲ್ಲಿ, ಜಗತ್ತಿನಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ ಮತ್ತು ಉಲ್ಲಂಘನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಭವಿಷ್ಯ ಮಾಲಿಕಾದಲ್ಲಿ,
ಕಲಿಯುಗದ ಅಂತ್ಯದಲ್ಲಿ ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಮಹಾಪುರುಷ ಪಂಚಸಖರು ಹೇಳಿದ್ದಾರೆ. ಇಂದು ಮಾಲಿಕಾದಲ್ಲಿ ವಿವರಿಸಿದ ಕಲಿಯುಗದ ಅಂತ್ಯದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಕೆಲವೇ ಲಕ್ಷಣಗಳ ಪುರಾವೆಗಳು ಮಾತ್ರ ಬಾಕಿ ಇವೆ.
ಆದ್ದರಿಂದ ಕಲಿಯುಗವು ಸಂಪೂರ್ಣವಾಗಿ ಮುಗಿದಿದೆ ಮತ್ತು ಪ್ರಸ್ತುತ ಸಮಯವು ಸಂಗಮಯುಗ ಅಥವಾ ಯುಗ ಸಂಧ್ಯಾ ಸಮಯ ಎಂದು ನಾವು ಹೇಳಬಹುದು.
“ಜೈ ಜಗನ್ನಾಥ”